Thursday 22 July 2010

ಏಕೆ ದಿನವೂ ಹಣ್ಣುಗಳನ್ನು ತಿನ್ನಬೇಕು?

ನಿಮ್ಮ ಜ್ಞಾಪಕಶಕ್ತಿ ಚುರುಕಾಗಿರಬೇಕೆ? ಬುದ್ಧಿ ಮೊನಚಾಗಿರಬೇಕೆ? ಪರೀಕ್ಷೆಗಳಲ್ಲಿ ಒಳ್ಳೆಯ ಮಾರ್ಕ್ಸ್ ಪಡೆಯಬೇಕು ಎಂದುಕೊಂಡಿದ್ದೀರಾ? ಸದಾ ಲವಲವಿಕೆಯಿಂದ ಚೂಟಿಯಾಗಿದ್ದು ಎಲ್ಲರ ಕೈಲೂ `ಭೇಷ್' ಎನಿಸಿಕೊಳ್ಳಬೇಕೆ? ಆರೋಗ್ಯ `ಫಸ್ಟ್ಕ್ಲಾಸ್' ಆಗಿರಬೇಕೆ? ನೀವು ಎಲ್ಲರಿಗಿಂತಲೂ ನಿಧಾನವಾಗಿ ಮುದುಕರಾಗಲು ಇಚ್ಛಿಸುತ್ತೀರಾ? ಇಲ್ಲಿದೆ `ರುಚಿಕರ' ಉಪಾಯ!!

ದಿನವೂ ತಾಜಾ ಹಣ್ಣುಗಳನ್ನು ತಿನ್ನಿ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಎಂಬುದು ಹಿಂದಿನ ಕಾಲದಿಂದಲೂ ಜನರಿಗೆ ಗೊತ್ತು. ಆದರೆ ಆಧುನಿಕ ಮನುಷ್ಯನ ಆಹಾರದಲ್ಲಿ ಹಣ್ಣಿಗೆ ಸ್ಥಾನವೇ ಇಲ್ಲವಾಗಿದೆ. ಅಥವಾ `ಊಟ ಮಾಡಿದ ನಂತರ ತಿನ್ನುವ' ಕೊನೆಯ ಸ್ಥಾನ ಹಣ್ಣುಗಳಿಗೆ ನೀಡಲಾಗಿದೆ! ಹಣ್ಣುಗಳು ಆರೋಗ್ಯ, ಆಯುಷ್ಯ ಹೆಚ್ಚಿಸುತ್ತವೆ ಎಂಬ ಅಂಶ ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಹಣ್ಣುಗಳು ನಿಮ್ಮ ಆಹಾರದ ಪ್ರಮುಖ ಭಾಗವಾಗಲೇಬೇಕು.

ಈ ಭೂಮಿಯಲ್ಲಿ ಶೇ. 70 ಭಾಗ ನೀರು. ಮನುಷ್ಯ ಶರೀರದಲ್ಲೂ ಶೇ. 80ರಷ್ಟು ನೀರು! ಹಣ್ಣುಗಳ ಶೇ. 80ರಷ್ಟು ಪಾಲೂ ನೀರೇ. ನಿಮಗೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ಇದ್ದು ನಿಮ್ಮ ಶರೀರ ಪ್ರಕೃತಿಗೆ ಹಣ್ಣು ಎಷ್ಟು ಹೊಂದಿಕೊಂಡಿದೆ ನೋಡಿದಿರಾ?

`ಬ್ಯಾಡ್ ಕೊಲೆಸ್ಟೆರಾಲ್' (ರಕ್ತದಲ್ಲಿನ ಒಂದು ರೀತಿಯ ಕೊಬ್ಬಿನಂಶ) ಬಗ್ಗೆ ಕೇಳಿದ್ದೀರಾ? ಅದರಿಂದ ಹೃದಯ ರೋಗಗಳು ಬರುತ್ತವೆ. ಹಣ್ಣಿನಲ್ಲಿ ಅದು ಇಲ್ಲವೇ ಇಲ್ಲ!!

ವ್ಹಾ! ಇದು ಬುದ್ಧಿಶಕ್ತಿ ಹೆಚ್ಚಿಸುವ ಮ್ಯಾಜಿಕ್ ಆಹಾರ! ಹಣ್ಣುಗಳು ಕೇವಲ ಹೊಟ್ಟೆಗೆ ಮಾತ್ರವಲ್ಲ, ಮೆದುಳಿಗೂ ಅತ್ಯುತ್ತಮ ಆಹಾರ!! ತಾಜಾ ಹಣ್ಣು ತಿನ್ನುವವರ ಮೆದುಳೂ `ತಾಜಾ' ಆಗಿರುತ್ತದೆ. ಅವರ ನೆನಪಿನ ಶಕ್ತಿ ಚುರುಕಾಗಿರುತ್ತದೆ. ಅವರಿಗೆ ಓದಿದ್ದು, ಕೇಳಿದ್ದು ಸುಲಭವಾಗಿ ಅರ್ಥವಾಗುತ್ತದೆ. ವಿಷಯಗಳು ಬೇಕೆಂದಾಗ ಚಕ್ಕನೆ, ವೇಗವಾಗಿ ನೆನಪಿಗೆ ಬರುತ್ತವೆ. ``ನಾಲಿಗೆ ತುದೀಲಿದೆ. ಹೇಳ್ತೀನಿ, ಒಂದ್ನಿಮಿಷ ಇರು'' ಎನುವ ಗೋಜೇ ಇಲ್ಲ!

ದಿನವೂ ಹಣ್ಣು ತಿನ್ನುವವರಿಗೆ ಮಾನಸಿಕ ಸಮಸ್ಯೆಯೂ ಕಡಿಮೆಯಂತೆ, ಆತ್ಮವಿಶ್ವಾಸ ಹೆಚ್ಚಂತೆ. ನಾವು ಚೆನ್ನಾಗಿರುವುದಷ್ಟೇ ಮುಖ್ಯವಲ್ಲ. `ನಾವು ಚೆನ್ನಾಗಿದ್ದೇವೆ' ಎಂಬ ಭಾವನೆ ಇಟ್ಟುಕೊಂಡು ನಾವು ನೆಮ್ಮದಿಯಾಗಿರುವುದೂ ಬಹಳ ಮುಖ್ಯ. ಹಣ್ಣುಗಳು ಇಂತಹ ಭಾವನೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು.

ತಮ್ಮ ಎಷ್ಟೋ ಕಾಯಿಲೆಗಳು ತುಂಬಾ ಹಣ್ಣು ತಿನ್ನುವುದರಿಂದ ವಾಸಿಯಾಯಿತು ಎನ್ನುವವರು ಇದ್ದಾರೆ. ಈ ಕುರಿತು ಇನ್ನೂ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ.

ಹಣ್ಣು ತಿನ್ನುವವರು ಯಾವ ಪ್ರ್ರಾಣಿಗಳನ್ನೂ ಕೊಲ್ಲಬೇಕಿಲ್ಲ. ಪಾಪ, ಎಲ್ಲ ಪ್ರಾಣಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ, ಅಲ್ಲವೆ? ಮಾಂಸ ಹೆಚ್ಚು ತಿನ್ನುವುದು ಹೃದಯಕ್ಕೆ ಒಳ್ಳೆಯಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಹಣ್ಣು ಅಪಾಯವಿಲ್ಲದ ಅಹಿಂಸಾ ಆಹಾರ. ಸಾತ್ವಿಕ ಆಹಾರ. ಅದು ದೇವರಿಗೂ ಇಷ್ಟ!

ಹಣ್ಣುಗಳು ದುಬಾರಿ, ನಮ್ಮ ಮಕ್ಕಳಿಗೆ ಕೊಡಿಸುವುದು ಕಷ್ಟ ಎಂಬುದು ಹಲವಾರು ತಾಯಿತಂದೆಯರ ಭಾವನೆ. ಆದರೆ ಅಂತಹ ಅನೇಕರು ತಮ್ಮ ಮಕ್ಕಳಿಗೆ ಕೊಡಿಸುವ `ಕುರ್ ಕುರೇ', `ಮಹಾ ಮಂಚ್', `ಡೈರಿ ಮಿಲ್ಕ್ ಚಾಕೊಲೇಟ್', `ಪೆಪ್ಸಿ, ಕೋಕ್' ಗಳ ಬೆಲೆ ಹಣ್ಣುಗಳಿಗಿಂತಲೂ ದುಬಾರಿ! ಒಂದು ಬಾಳೆಹಣ್ಣಿನ ಬೆಲೆ ಈಗಲೂ ಬರೀ ಎರಡೇ ರೂಪಾಯಿ!!

ಹಣ್ಣುಗಳಲ್ಲಿ ವಿಟಮಿನ್ಗಳು, ಖನಿಜಾಂಶಗಳು ಅಪಾರವಾಗಿವೆ. ಅವು `ಕೆಮಿಕಲ್' ಆಹಾರದಂತಲ್ಲ. ಅವೆಷ್ಟು `ಫ್ರೆಶ್', ಎಷ್ಟೊಂದು ರುಚಿ! ಸಿಹಿ ಸಿಹಿ, ಹುಳಿ ಸಿಹಿ..ವ್ಹಾಹ್!!

ಇತಿಹಾಸ ಬೋರು ಎನ್ನುತ್ತೀರಾ?

ಇತಿಹಾಸ ಬೋರಲ್ಲ. ಅದು ಬಹುಮುಖ್ಯವಾದ ವಿಷಯ. ಏಕೆ ಗೊತ್ತೆ?

ಇಷ್ಟಕ್ಕೂ ಇತಿಹಾಸ ಎಂದರೇನು? ಸುಲಭವಾಗಿ ಹೇಳುವುದಾದರೆ ಇತಿಹಾಸ ನಮ್ಮ ಹಿಂದಿನ ಕಾಲದ ಬಗೆಗಿನ ಅರಿವು. ನಮ್ಮ ಹಿಂದಿನವರ ವಿಷಯಗಳನ್ನು ತಿಳಿದುಕೊಳ್ಳುವುದು. ಹಿಂದಿನ ಜನರ ಜೀವನ, ಹಿಂದೆ ನಡೆದ ಘಟನೆಗಳು, ಯುದ್ಧಗಳು, ಹಿಂದೆ ಇದ್ದ ಸಕರ್ಾರಗಳು, ರಾಜರುಗಳು - ಹೀಗೆ ಹಲವು ಸಂಗತಿಗಳನ್ನು ಕುರಿತು ಅಧ್ಯಯನ ಮಾಡುವುದು.

ಹಿಂದಿನ ರಾಜರು, ರಾಜಕೀಯ, ಆಥರ್ಿಕ, ಮಿಲಿಟರಿ ಕಾಯರ್ಾಚರಣೆಗಳು ಹೇಗೆ ಇತಿಹಾಸವೋ ಹಾಗೆಯೇ ಹಿಂದಿನ ಸಾಮಾನ್ಯ ಜನರ ಜೀವನ ವಿಧಾನವನ್ನು ಕುರಿತ ವಿವರಗಳೂ ಸಹ ಇತಿಹಾಸ. ಅವರ ನಂಬಿಕೆ, ಆಚಾರ, ವಿಚಾರ, ಧರ್ಮ, ನಡವಳಿಕೆ - ಇವೆಲ್ಲವೂ ಇತಿಹಾಸದ ಅಧ್ಯಯನ ವಸ್ತುಗಳೇ.

ನಮ್ಮ ಇಂದಿನ ಜೀವನಕ್ಕೂ ಇತಿಹಾಸಕ್ಕೂ ಏನು ಸಂಬಂಧ? ನಾವೇಕೆ ಇತಿಹಾಸ ತಿಳಿದುಕೊಳ್ಳಬೇಕು? ಏಕೆಂದರೆ ಇತಿಹಾಸ ನಮ್ಮ ಇಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಾವಿಂದು ಬದುಕುತ್ತಿರುವ ರೀತಿಗೂ ನಮ್ಮ ಪರಿಸ್ಥಿತಿಗೂ ಇತಿಹಾಸವೇ ಕಾರಣ.

ಈಗ ನೋಡಿ. ದಶಕಗಳ, ಶತಮಾನಗಳ ಅಥವಾ ಸಹಸ್ರಾರು ವರ್ಷಗಳ ಹಿಂದೆ ತೆಗೆದುಕೊಳ್ಳುವ ಯಾವುದೋ ಒಂದು ನಿರ್ಣಯದ ಫಲವಾಗಿ ನಮ್ಮ ಜೀವನದ ಸ್ವರೂಪ ಇರುತ್ತದೆ. ಉದಾಹರಣೆಗೆ ಮಹಾವೀರನ ಅಹಿಂಸೆ ಅವನ ಅನುಯಾಯಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ನೋಡಿ. ಇಂದು ಕೋಟ್ಯಂತರ ಜೈನರು ಶುದ್ಧ ಸಸ್ಯಾಹಾರಿ ವಿಶಿಷ್ಟ ಆಹಾರ ಪದ್ಧತಿ ಅನುಸರಿಸುತ್ತಾರೆ. ಇನ್ನೊಂದು ಉದಾಹರಣೆ. ಯಾರೋ ಎಂದೋ ಭಾರತಕ್ಕೆ ಕಾಫಿ ಬೀಜ ತಂದರು. ಇಂದು ದೇಶದ ಕೋಟ್ಯಂತರ ಜನರು ಪ್ರತಿದಿನ ಕಾಫಿ ಕುಡಿಯುತ್ತಿದ್ದಾರೆ. ಇನ್ನೂ ಒಂದು ಉದಾಹರಣೆ. ಎಂದೋ ಯಾರೋ ಪ್ರವಾದಿಗಳು ಹಿಂಸೆಯನ್ನು ಬೋಧಿಸಿದರು ಎಂದುಕೊಳ್ಳಿ. ಅವರ ಅನುಯಾಯಿಗಳು ಸಾವಿರಾರು ವರ್ಷಗಳು ಕಳೆದರೂ ಹಿಂಸೆಯನ್ನೇ ಮುಂದುವರಿಸುತ್ತಾರೆ. ಭಯೋತ್ಪಾದಕರಾಗುತ್ತಾರೆ. ಎಲ್ಲರಿಗೂ ತೊಂದರೆಯಾಗುತ್ತದೆ.

ಇತಿಹಾಸವನ್ನು ಸರಿಯಾಗಿ ಅರಿಯುವುದರಿಂದ, ಪ್ರಾಮಾಣಿಕವಾಗಿ ಸಂಶೋಧನೆ ಮಾಡುವುದರಿಂದ, ಹಿಂದಿನಿಂದ ಈವರೆಗೆ ಜನಜೀವನ, ಪರಿಸರ, ಪ್ರಾಣಿಜೀವನ ಹೇಗೆ ನಡೆದುಬಂದಿದೆ ಎನ್ನುವುದು ತಿಳಿಯುತ್ತದೆ. ನಮ್ಮ ಈಗಿನ ಸ್ಥಿತಿ ಹೆಮ್ಮೆ ಪಡುವಂತಹ ಸಂಗತಿಯೋ? ಅಲ್ಲವೋ? ಎಂಬುದು ತಿಳಿಯುತ್ತದೆ. ನಮ್ಮದು ಸುಧಾರಣೆ ಹೊಂದಿರುವ ಜೀವನವೋ ಅಲ್ಲವೋ ಎಂಬುದೂ ತಿಳಿಯುತ್ತದೆ.

ಅಲ್ಲದೇ ಇತಿಹಾಸ ಕೆದಕುವುದು ಪತ್ತೇದಾರಿ (ಡಿಟೆಕ್ಟಿವ್) ಪುಸ್ತಕ ಓದಿದಂತೆ ರೋಮಾಂಚಕ ಅನುಭವ! ಥ್ರಿಲ್!!

ನಮ್ಮ ಗತಕಾಲದ ಬಗ್ಗೆ ಹಿಂದಿನ ತಲೆಮಾರುಗಳಿಂದ ಬಂದಿರುವ  ಬಾಯಿಮಾತಿನ ದಾಖಲೆಗಳಿವೆ. ಬರಹ ರೂಪದ ದಾಖಲೆಗಳಿವೆ. ಭೂಗರ್ಭದಲ್ಲೂ ಅನೇಕ ದಾಖಲೆಗಳು ಸಿಗುತ್ತವೆ. ವಿಜ್ಞಾನದ ನೆರವಿನಿಂದಲೂ ಅನೇಕ ರೀತಿಯ ದಾಖಲೆಗಳನ್ನು ಅರಿಯಬಹುದು. ಸಿಕ್ಕ ದಾಖಲೆಗಳನ್ನು ಪರಿಶೀಲಿಸಬಹುದು. ಇವನ್ನೆಲ್ಲ ನಮಗಾಗಿ ದಾಲಿಸುವುದು ಇತಿಹಾಸಕಾರರ ಕೆಲಸ. ಆದರೆ ಅವರು ಪ್ರಾಮಾಣಿಕರಾಗಿರಬೇಕು. ಈವರೆಗೆ ತಿಳಿದಿರುವ ವಿಷಯಗಳನ್ನು ಸರಿಯಾಗಿ ವ್ಯಾಖ್ಯಾನಿಸಬೇಕು. ಸುಳ್ಳುಗಳನ್ನು ಹರಡುವ ಕುಚೇಷ್ಟೆ ಮಾಡಬಾರದು. ಅವರಿಗೆ ಯಾವುದೇ ಪಕ್ಷಪಾತ ಇರಬಾರದು. ಹೊಸ ಸತ್ಯಗಳು ತಿಳಿದಾಗ ಹಳೆಯ ಸಂಗತಿಗಳನ್ನು ಬದಲಿಸಿ ಹೊಸ ವಿಷಯ ತಿಳಿಸಬೇಕು.

1000 ವರ್ಷ ಬದುಕಲು ಸಾಧ್ಯವೆ?


ನೂರು ವರ್ಷ ಬದುಕುವ ಆಸೆ ಎಲ್ಲರಿಗೂ ಇರುತ್ತೆ. ಒಳ್ಳೆಯ ಶರೀರ ಪ್ರಕೃತಿ, ಒಳ್ಳೆಯ ನೈಸಗರ್ಿಕ ಜೀವನ ವಿಧಾನ, ಉತ್ತಮ ಆಹಾರ-ವಿಹಾರ, ಸಮಾಧಾನಕರ ಆರೋಗ್ಯ ಇರುವವರು ಯಾವುದೇ ದುರಂತಗಳಿಗೆ ತುತ್ತಾಗದೇ ಇದ್ದರೆ ನೂರು ವರ್ಷ ಬದುಕಬಹುದು.

ಆದರೆ ಸಾವಿರ ವರ್ಷ ಬದುಕಬಹುದೆ? ಅಷ್ಟು ವರ್ಷಗಳ ಕಾಲ ಇರುವ ಮರಗಳೇನೋ ಇವೆ. ಮನುಷ್ಯರು ಏನಾದರೂ  ಪ್ರಯತ್ನ ಮಾಡಿ ಸಾವಿರ ವರ್ಷ ಬದುಕುವಂತೆ ಮಾಡಿಕೊಳ್ಳಲಾದೀತೆ?

ಕೇಂಬ್ರಿಜ್ ವಿಶ್ವವಿದ್ಯಾಲಯದ ಜೆನೆಟಿಕ್ ಹಾಗೂ ವೃದ್ದಾಪ್ಯ ತಜ್ಞ ಡಾ. ಔಬ್ರೆ ಡಿ ಗ್ರೇ `ಹೌದು, ಮನುಷ್ಯರು ಸಾವಿರ ವರ್ಷ ಬದುಕಬಹುದು' ಎಂದು ಸತತವಾಗಿ ವಾದಿಸುತ್ತಿದ್ದಾರೆ. 2006ರಲ್ಲಿ ಆಕ್ಸ್ಫಡರ್್ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. `ನಾಳೆಯ ಜನರು: ಆಯುಷ್ಯವರ್ಧನೆ ಹಾಗೂ ತಾಂತ್ರಿಕ ಸವಾಲುಗಳು' - ಎಂಬುದು ಆ ಸಮ್ಮೇಳನದ ಚಚರ್ಾವಿಷಯ. ಮನುಷ್ಯರು ತಮ್ಮ ಶರೀರವನ್ನು ನವೀಕರೀಸಿಕೊಳ್ಳಬಹುದೆ? ಮರುಜೋಡಣೆ ಮಾಡಿಕೊಳ್ಳಬಹುದೆ? ಇಷ್ಟಕ್ಕೂ `ನೈಸಗರ್ಿಕ' ಎಂದರೇನು? ಇದರಲ್ಲಿ ನಾವೆಷ್ಟು ಬದಲಾವಣೆ ತರಬಹುದು? ಇತ್ಯಾದಿ ವಿಷಯಗಳ ಬಗ್ಗೆ ಚಚರ್ೆ ನಡೆಯಿತು.

ನಮ್ಮ ಭೌತಿಕ ಗಡಿಯನ್ನು ಇನ್ನಷ್ಟು ವಿಸ್ತರಿಸಿ 150 ಅಥವಾ 200 ವರ್ಷಗಳು ಬದುಕಲು ಸಾಧ್ಯ ಎಂದು ನಂಬುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಇಂತಹವರು ತಮ್ಮನ್ನು `ಟ್ರಾನ್ಸ್ಹ್ಯೂಮನಿಸ್ಟ್ಸ್' ಎಂದುಕೊಳ್ಳುತ್ತಾರೆ. ಮಾನವರ ಶಾರೀರಿಕ, ಬೌದ್ಧಿಕ ಸಾಮಥ್ರ್ಯವನ್ನು ಹೊಸ ತಂತ್ರಜ್ಞಾನಗಳ ಮೂಲಕ ಹೆಚ್ಚಿಸಬಹುದು ಎಂಬುದು ಅವರ ನಂಬಿಕೆ. ಈ ಕುರಿತು ಸೈಮನ್ ಯಂಗ್ ಎನ್ನುವವರು `ಡಿಸೈನರ್ ಇವಲ್ಯೂಷನ್' ಎಂಬ ಪುಸ್ತಕ ಪ್ರಕಟಿಸಿದ್ದಾರೆ.

ಕೆಲವು ಜೆನೆಟಿಕ್ ತಂತ್ರಜ್ಞಾನದ ಸಾಧನೆಗಳಿಂದಾಗಿ ಮುಂಬರುವ ವರ್ಷಗಳಲ್ಲಿ ಸಾವಿರ ವರ್ಷ ಬದುಕುವಂತೆ ಮಾಡಬಹುದು ಎಂದು ಔಬ್ರೆ ವಾದಿಸುತ್ತಾರೆ. ಜನರಿಗೆ ರೋಗವೇ ಬರದಂತೆ ನೋಡಿಕೊಳ್ಳುವುದು, ಯಾವ ರೋಗ ಬಂದರೂ `ಠಣ್' ಅಂತ ವಾಸಿಮಾಡುವುದು, ಮುಂದೆ ಎಂದೋ ಒಂದು ದಿನ ಸಾಧ್ಯವಾಗುತ್ತದೆ; ಅದರ ಜೊತೆಗೆ ಶರೀರದ ತಾರುಣ್ಯ ಉಳಿಸುವ ತಂತ್ರಜ್ಞಾನವೂ ಅಭಿವೃದ್ಧಿಯಾದರೆ ಸಾವಿರ ವರ್ಷ ಸೊಗಸಾಗಿ ಬದುಕಬಹುದು ಎಂಬುದು ಅವರ ನಂಬಿಕೆ.

ಔಬ್ರೇ ಡಿ ಗ್ರೇ ದುಡ್ಡಿಗಾಗಿ ಈ ರೀತಿ ವಾದ ಮಾಡುತ್ತಿದ್ದಾರೆ ಎಂದೂ ಯಾರೂ ಆರೋಪಿಸುವುದಿಲ್ಲ. ಆದರೆ ಅವರ ನಂಬಿಕೆಯನ್ನು ಎಲ್ಲರೂ ಒಪ್ಪಿಲ್ಲ. `ಈ ಕನಸಿಗೂ ಮಿತಿ ಇರಬೇಕು. ಈತ ಒಂದು ರೀತಿ ವಿಚಿತ್ರ ವ್ಯಕ್ತಿ. ಜನರ ಆಯುಷ್ಯ ಪ್ರಮಾಣ ಒಂದಿಷ್ಟು ಹೆಚ್ಚಾಗಬಹುದು. ಹೊಸ ಸಂಶೋಧನೆೆಗಳ ಫಲವಾಗಿ ನೂರು ವರ್ಷ ಬದುಕುವವರ ಸಂಖ್ಯೆ ಹೆಚ್ಚಬಹುದು. ಅಥವಾ ಅತಿದೀಘರ್ಾಯುಗಳು 120-150 ವರ್ಷ ಬದುಕಬಹುದು ಅಷ್ಟೇ' ಎನ್ನುವ ವಿಜ್ಞಾನಿಗಳೇ ಹೆಚ್ಚು.

ಅದೇನೇ ಇರಲಿ. ಜನರು ಸಾವಿರ ವರ್ಷ ಬದುಕಿ ಮಾಡುವುದೇನು? ಎಲ್ಲರೂ ಸಾವಿರ ವರ್ಷ ಬದುಕುವಂತಾಯಿತು ಎಂದುಕೊಳ್ಳೋಣ. ಆಗ ಎಷ್ಟು ವರ್ಷಗಳ ಕಾಲ `ಬಾಲ್ಯಾವಸ್ಥೆ' ಇರುತ್ತದೆ? ಯೌವನದ ಅವಧಿ ಎಷ್ಟು? ಯಾವ ವಯಸ್ಸಿನವರನ್ನು `ಮುದುಕರು' ಎನ್ನಬಹುದು? - ಈ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿಲ್ಲ!

ಇನ್ನೂ ಕೆಲವು ಗಂಭೀರ ಪ್ರಶ್ನೆಗಳೂ ಏಳುತ್ತವೆ. ಪ್ರತಿ ದಂಪತಿಗಳೂ ಸುಮಾರು 300-400 ವರ್ಷಗಳ ಕಾಲ 100-150 ಮಕ್ಕಳನ್ನು ಹಡೆದರೆ ಗತಿ ಏನು? ಸಾವಿರ ವರ್ಷ ಬದುಕಿದ ಮಾತ್ರಕ್ಕೆ ಅವರ ಆಥರ್ಿಕ ಪರಿಸ್ಥಿತಿ ಏನೂ ಬದಲಾಗುವುದಿಲ್ಲ ಅಲ್ಲವೆ?

ಸಂಶೋಧನೆ ಯಶಸ್ವಿಯಾದ ಮೊದಲ ಒಂದು ಸಾವಿರ ವರ್ಷಗಳಲ್ಲಿ ಯಾರೂ ಸಾಯದಿದ್ದರೆ ಭೂಮಿಯ ಒಟ್ಟು ಜನಸಂಖ್ಯೆ ಎಷ್ಟಾಗುತ್ತದೆ? ಅಷ್ಟೊಂದು ಜನರಿಗೆ ಆಹಾರ, ಬಟ್ಟೆ, ಮನೆಗಳನ್ನು ಒದಗಿಸಲು ಸಾಧ್ಯವಾದೀತೆ? ಉದ್ಯೋಗ ಎಲ್ಲಿಂದ ತಂದು ಕೊಡುವುದು? ಸಂಬಳ-ಭತ್ಯೆ ಒದಗಿಸುವುದು, ಪೆನ್ಷನ್ ನೀಡುವುದು ಹೇಗೆ? ದೇಶದ ಹಾಗೂ ಜಗತ್ತಿನ ಹಣಕಾಸು ವ್ಯವಹಾರಗಳ ಕಥೆ ಏನು?

ಆಮೇಲೆ ನಮ್ಮ ರಾಜಕಾರಣಿಗಳು ಈಗಿನ ಪಂಚವಾರ್ಷಿಕ ಯೋಜನೆಗಳಿಗೆ ಬದಲಾಗಿ `ಶತವಾರ್ಷಿಕ ಯೋಜನೆಗಳನ್ನು' ಹಾಕಲು ಶುರುಮಾಡಿಕೊಳ್ಳುತ್ತಾರಷ್ಟೆ! ಅವರ ಸಂಸದೀಯ ಸದಸ್ಯತ್ವದ ಅವಧಿಯೂ ಐದರಿಂದ ಐವತ್ತು ವರ್ಷಗಳಿಗೆ ಏರಿಕೆಯಾಗಿಬಿಡುತ್ತದೆ!! 

ಒಟ್ಟಿನಲ್ಲಿ ನಾವು ಹೇಗೆ ಒಳ್ಳೆಯ ರೀತಿ ಬದುಕುತ್ತೇವೆ ಎನ್ನುವುದೇ ಮುಖ್ಯ, ಅಲ್ಲವೆ?

ಪ್ರಾಚೀನ ಭಾರತದಲ್ಲಿ ಜನಜೀವನ ಹೇಗಿತ್ತು?


ಇಂದು ನಾವು ಟಿವಿ ನೋಡುತ್ತೇವೆ. ಕಂಪ್ಯೂಟರ್ ಬಳಸುತ್ತೇವೆ. ಇಂಟರ್ನೆಟ್ ಬಂದ ಮೇಲಂತೂ ಬಹಳ ಅನುಕೂಲವಾಗಿದೆ. ಆದರೆ ಪ್ರಾಚೀನ (ಬಹಳ ಹಿಂದಿನ) ಕಾಲದ ಭಾರತ ಹೇಗಿತ್ತು? ಆಗಿನ ಜನರು ಹೇಗಿದ್ದರು? ಅವರು ಜೀವನಕ್ರಮ ಹೇಗಿತ್ತು? ಅವರು ಯಾವ ರೀತಿಯ ಬಟ್ಟೆ ಹಾಕಿಕೊಳ್ಳುತ್ತಿದ್ದರು? ಯಾವ ತಿನಿಸುಗಳನ್ನು ತಿನ್ನುತ್ತಿದ್ದರು? ಆಗಿನ ಮಕ್ಕಳು ಆಟಿಕೆಗಳನ್ನು ಇಟ್ಟುಕೊಂಡು ಆಡುತ್ತಿದ್ದರೆ? ಶಾಲೆಗೆ ಹೋಗುತ್ತಿದ್ದರೆ? `ಹೋಮ್ ವಕರ್್' ಮಾಡುತ್ತಿದ್ದರೆ?

ನಿಮಗೆ ಆಶ್ಚರ್ಯವಾಗಬಹುದು. ಸಾವಿರಾರು ವರ್ಷಗಳ ಹಿಂದೆಯೂ  ಭಾರತದಲ್ಲಿ ಜನಜೀವನ ಸರಿಸುಮಾರು ಈಗಿರುವಂತೆಯೇ ಇತ್ತು! ಟಿವಿ, ಇಂಟರ್ನೆಟ್, ಮೋಟಾರ್ ಕಾರ್ ಮುಂತಾದ ಈಗಿನ ಅನೇಕ ತಾಂತ್ರಿಕ ಸಾಧನಗಳು ಇಲ್ಲದಿದ್ದರೂ ಆಗಿನ ಜನರೂ ವೈವಿಧ್ಯಮಯ ಸಾಧನಗಳನ್ನು ಬಳಸುತ್ತಿದ್ದರು. ಆನಂದವಾಗಿ ಜೀವನದ ಸಂತೋಷ ಅನುಭವಿಸುತ್ತಿದ್ದರು.

ಕ್ರಿ.ಪೂ. 3500 ವರ್ಷಗಳ ಹಿಂದಿನ ಸಿಂಧೂ-ಸರಸ್ವತಿ ನಾಗರಿಕತೆಯು ವೈದಿಕ ನಾಗರಿಕತೆ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಐದಾರು ಸಾವಿರ ವರ್ಷಗಳ ಹಿಂದೆ ಈ ಹಿಂದೂಗಳು ದೊಡ್ಡ ನಗರಗಳನ್ನು ನಿಮರ್ಿಸಿದ್ದರು. ವಿಶಾಲವಾದ ನೇರವಾದ ರಸ್ತೆಗಳನ್ನು ನಿಮರ್ಿಸಿದ್ದರು. ಇಟ್ಟಿಗೆಗಳಿಂದ ಸುಂದರವಾದ, ವಿಶಾಲವಾದ ಮನೆಗಳನ್ನು ಕಟ್ಟಿಕೊಂಡಿದ್ದರು. ಪ್ರತಿ ಮನೆಗೂ ಖಾಸಗಿ ಸ್ನಾನಗೃಹ, ಶೌಚಾಲಯಗಳಿದ್ದವು! ಸಿಂಧೂ ಕಣಿವೆಯ ಮಕ್ಕಳು ಆಟಿಕೆಗಳೊಂದಿಗೆ ಆಡುತ್ತಿದ್ದರು. ಮಹಿಳೆಯರು ಮೇಕಪ್, `ಲಿಪ್ಸ್ಟಿಕ್' (ಈಗಿನ ರಾಸಾಯನಿಕ ಲಿಪ್ಸ್ಟಿಕ್ಕಲ್ಲ) ಸಹ ಬಳಸುತ್ತಿದ್ದರು!!

ಇವೆಲ್ಲ ನಮಗೆ ಹೇಗೆ ಗೊತ್ತಾಯಿತು? 1922ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಹರಪ್ಪ ಎಂಬ ಕುತೂಹಲಕಾರಿ ಸ್ಥಳದಲ್ಲಿ ಪ್ರಾಚೀನ ನಗರದ ಅವಶೇಷಗಳನ್ನು ಪತೆಹಚ್ಚಿದರು! ಈಗ ಈ ಪ್ರದೇಶ ಪಾಕಿಸ್ತಾನಕ್ಕೆ ಸೇರುತ್ತದೆ. ಹರಪ್ಪದಿಂದ 700 ಕಿ.ಮೀ. ದೂರದಲ್ಲಿ ಮಹೆಂಜೊ-ದಾರೊ ಎಂಬ ಸ್ಥಳ ಇದೆ. ಅಲ್ಲಿಯೂ ಪ್ರಾಚೀನ ನಗರದ ಅವಶೇಷಗಳನ್ನು ಅಗೆದು ಹೊರಗೆ ಕಾಣಿಸಿದರು. ಗುಜರಾತಿನ ಧೋಲವೀರದಲ್ಲೂ ಪ್ರಾಚೀನ ನಗರ ಪತ್ತೆಯಾಯಿತು. ಈ ನಾಗರಿಕತೆಯನ್ನು `ಹರಪ್ಪ ನಾಗರಿಕತೆ', `ಸಿಂಧೂ ಕಣಿವೆ ನಾಗರಿಕತೆ' ಎಂದು ಕರೆದರು.

ಈ ಪ್ರದೇಶದ ಜನರು ಬರೀ ಸಿಂಧೂ ನದಿಯನ್ನು ಮಾತ್ರ ಆಶ್ರಯಿಸಿರಲಿಲ್ಲ, ಅತಿ ವಿಶಾಲವಾದ ಸರಸ್ವತೀ ನದಿ ಅವರ ಜೀವನಾಡಿಯಾಗಿತ್ತು ಎಂಬ ಅಂಶ ಈಚೆಗೆ ಸಾಬೀತಾಗಿದೆ. ಉಪಗ್ರಹಗಳಿಂದ ತೆಗೆದ ಚಿತ್ರಗಳು ವೇದಗಳಲ್ಲಿ ಹೇಳಿರುವ ಸರಸ್ವತಿ ನದಿಯ ಪಾತ್ರವನ್ನು ಗುರುತಿಸಿವೆ. ಈಗ ಹರಪ್ಪ ನಾಗರಿಕತೆಯನ್ನು `ಸಿಂಧೂ-ಸರಸ್ವತಿ ನಾಗರಿಕತೆ' ಎಂದು ಸಕಾರಣವಾಗಿ ಕರೆಯಲಾಗುತ್ತಿದೆ.

ಇಂದು ನಿಮ್ಮ ಶರೀರವನ್ನು ಎಷ್ಟು `ಕೆಫಿನ್' ಸೇರಿತು?


`ಕೆಫಿನ್' ಜಗತ್ತಿನ ಅತಿ `ಜನಪ್ರಿಯ' ಔಷಧಿ. ಅದನ್ನು ತಲೆನೋವು ಮೊದಲಾದ ತೊಂದರೆಗಳಿಗೆ ಪರಿಹಾರವಾಗಿ ಮಾತ್ರೆಗಳಲ್ಲಿ ಬಳಸುತ್ತಾರೆ. ಔಷಧಿಗಳ ತಯಾರಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸಲ್ಪಡುವ ಈ ವಸ್ತುವನ್ನು ನಾವು ಕಾಫಿ, ಟೀ, ಚಾಕೊಲೇಟ್ ಮುಂತಾದ ಆಹಾರಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆಗೆ ತೆಗೆದುಕೊಳ್ಳುತ್ತೇವೆ.

ಹೌದು ಕೆಫಿನ್ ಕಾಫಿ, ಟೀ, ಕೋಲಾ, ಕೋಕೊಗಳಲ್ಲೆಲ್ಲ ಇರುತ್ತದೆ. ಅದು ಸುಮಾರು 60 ಜಾತಿಯ ಸಸ್ಯಗಳಲ್ಲಿ ಕಂಡುಬರುತ್ತದೆ. ಈ ಸಸ್ಯಗಳಿಗೆ ಕೀಟಗಳು ಮುತ್ತದಂತೆ ನೈಸಗರ್ಿಕ ಕೀಟನಾಶಕದ ರೀತಿ ಕೆಫಿನ್ ಕೆಲಸಮಾಡುತ್ತದೆ!

ಶುದ್ಧ ಕೆಫಿನ್, ಕ್ಸಾಂಥೈನ್ ರಾಸಾಯನಿಕ ಸಮೂಹಕ್ಕೆ ಸೇರುವ ಪದಾರ್ಥ. ಅದಕ್ಕೆ ವಾಸನೆ ಇರುವುದಿಲ್ಲ. ಅದರ ರುಚಿ ಕಹಿ.

ವಿಷವನ್ನು ನಾವು ಆಡುಭಾಷೆಯಲ್ಲಿ ಸಾಮಾನ್ಯವಾಗಿ `ಕಹಿ' ಎಂದೇ ಹೇಳುತ್ತೇವೆ ಅಲ್ಲವೆ? ನಿಮಗೆ ಗೊತ್ತಿರಲಿ, ಹೆಚ್ಚು ಪ್ರಮಾಣದಲ್ಲಿ ಕೆಫಿನ್ ಸೇವಿಸುವುದೂ ಸಹ ವಿಷವನ್ನೇ ಸೇವಿಸಿದಂತೆ. ವಿಜ್ಞಾನಿಗಳ ಪ್ರಕಾರ, 10 ಗ್ರಾಂ ಕೆಫಿನ್ ಒಬ್ಬ ಮನುಷ್ಯನನ್ನು ಸಾಯಿಸಲು ಸಾಕು. ಅಂದರೆ 80-100 ಕಪ್ ಕಾಫಿಯಲ್ಲಿ ಒಬ್ಬ ಮನುಷ್ಯನನ್ನು ಕೊಲ್ಲುವಷ್ಟು ಕೆಫಿನ್ ಇರುತ್ತದೆ! ಆದರೆ ಒಂದೇ ಬಾರಿಗೆ ಅಷ್ಟು ಕಪ್ ಕಾಫಿ ಕುಡಿಯುವುದು ಸುಲಭವಲ್ಲ.

ಜನರು ಏಕೆ ಕೆಫಿನ್ ಸೇವಿಸುತ್ತ್ತಾರೆ? ಏಕೆಂದರೆ ಅದು ಅವರ ಕೇಂದ್ರ ನರಮಂಡಲವನ್ನು ಉದ್ರೇಕಿಸುತ್ತದೆ. ಅದರಿಂದ ಸಣ್ಣ ಪ್ರಮಾಣದ ಸುಸ್ತು, ಬೇಸರ ಮಾಯವಾಗುತ್ತವೆ. ಶರೀರ ಚುರುಕಾಗುತ್ತದೆ. ಚಟುವಟಿಕೆ ಹೆಚ್ಚುತ್ತದೆ. ಅಲ್ಲದೇ ಕೆಫಿನ್ ಒಂದು ಉತ್ತೇಜನಕಾರಿ ಪದಾರ್ಥ. ಹೀಗಾಗಿ ಅದನ್ನು ಪದೇಪದೇ ಸೇವಿಸಬೇಕೆಂಬ ಗೀಳು ಹೆಚ್ಚಾಗುತ್ತದೆ. ದೊಡ್ಡವರು ಸದಾ ಕಾಫಿ, ಟೀ ಬೇಕೇಬೇಕು ಎನ್ನುತ್ತಾರೆ. ಮಕ್ಕಳು `ಚಾಕೊಲೇಟ್ ಬೇಕೂ....' ಎಂದು ಸದಾ ಹಠಹಿಡಿಯುತ್ತವೆ. ಅವುಗಳನ್ನು ಮಾರುವವರಿಗೆ ಒಳ್ಳೆಯ ಲಾಭ ಬರುತ್ತದೆ.

ಕೆಫಿನ್ ಹೆಚ್ಚಾಗಿ ಶರೀರಕ್ಕ್ಕೆ ಸೇರುತ್ತಿದ್ದಂತೆ ನಿದ್ರಾಹೀನತೆ, ತಲೆನೋವು ಕಾಡಲಾರಂಭಿಸುತ್ತವೆ. ರಕ್ತದೊತ್ತಡ ಹೆಚ್ಚಾಗುತ್ತದೆ. ಕ್ರಮೇಣ ಹೃದಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಪದೇಪದೇ ಕೆಫಿನ್ ಸೇವಿಸುವವರು ಸಕಾಲದಲ್ಲಿ ಸೇವಿಸದಿದ್ದರೂ ತಲೆನೋವು, ನಿದ್ರಾಹೀನತೆ, ಮೈಕೈನೋವು ಕಾಡುತ್ತವೆ!

ಕೆಫಿನ್ ಅನೇಕ ಪೇಯ, ಆಹಾರ ಹಾಗೂ ಔಷಧಿಗಳಲ್ಲಿದೆ. 150 ಮಿ. ಲೀ. ಕಾಫಿಯಲ್ಲಿ 60-150 ಮಿ. ಗ್ರಾಂ.; ಅಷ್ಟೇ ಟೀಯಲ್ಲಿ 40-80 ಮಿ. ಗ್ರಾಂ.; 250 ಮಿ. ಲೀ. ಜೋಲ್ಟ್ ಕೋಲಾದಲ್ಲಿ 100 ಮಿ. ಗ್ರಾಂ.; ಅಷ್ಟೇ ಡಯಟ್ ಕೋಕಾ ಕೋಲಾದಲ್ಲಿ 45 ಮಿ .ಗ್ರಾಂ.; ಸಾಧಾರಣ ಕೋಕಾ ಕೋಲಾದಲ್ಲಿ 64 ಮಿ. ಗ್ರಾಂ.; ಪೆಪ್ಸಿ ಕೋಲಾದಲ್ಲಿ 43 ಮಿ. ಗ್ರಾಂ.; 50 ಗ್ರಾಂ ಚಾಕೊಲೇಟ್ ಬಾರ್ನಲ್ಲಿ 3-63 ಮಿ. ಗ್ರಾಂ.; ನೆಸ್ಲೆ ಕ್ರಂಚ್ ಬಾರ್ನಲ್ಲಿ 10 ಮಿ. ಗ್ರಾಂ.; ಮಿಲ್ಕ್ ಚಾಕೊಲೇಟ್ನಲ್ಲಿ 15 ಮಿ. ಗ್ರಾಂ.; ಕಿಟ್ಕ್ಯಾಟ್ ಬಾರ್ನಲ್ಲಿ 5 ಮಿ. ಗ್ರಾಂ. ಕೆಫಿನ್ ಇದೆ.

ಮೇಲಿನ ಪಟ್ಟಿ ಉಪಯೋಗಿಸಿ ಪ್ರತಿದಿನವೂ ನಿಮ್ಮ ಹೊಟ್ಟೆಯನ್ನು ಎಷ್ಟು ಪ್ರಮಾಣದ ಕೆಫಿನ್ ಸೇರುತ್ತದೆ ಎಂಬುದನ್ನು ಲೆಕ್ಕಹಾಕಬಹುದು.

ಸಾಧ್ಯವಾದಷ್ಟೂ ಕೆಫಿನ್ ಸೇವನೆ ಕಡಿಮೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ.

Wednesday 21 July 2010

ನೀವು `ಫಿಟ್' ಆಗಿರಲು ಹೀಗೆಮಾಡಿ ಸಾಕು


ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನವರಿಗೂ ಅತ್ಯಗತ್ಯ. ಪರೀಕ್ಷೆ ಹತ್ತಿರ ಬಂದೊಡನೇ `ಅಯ್ಯೋ! ಹೊಟ್ಟೆನೋವು' ಎನ್ನುವಂತಾಗಬಾರದಲ್ಲವೆ? ಅದಕ್ಕೇನು ಮಾಡಬೇಕು? ಮೊದಲಿಗೆ ನಿಮ್ಮ ಆಹಾರ ಪೌಷ್ಟಿಕವಾಗಿರಬೇಕು. ಅದರ ಜೊತೆಗೇ ನಿಮ್ಮ ಆಟ-ಪಾಠಗಳು ಚೆನ್ನಾಗಿ ನಡೆಯಬೇಕು. ಒಂದಿಷ್ಟು ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಶಾಲೆಯ ಯೋಗ ಕ್ಲಾಸ್, ಫಿಸಿಕಲ್ ಎಜುಕೇಷನ್ ತಪ್ಪಿಸಿಕೊಳ್ಳಬೇಡಿ.

ಆಹಾರ, ವ್ಯಾಯಾಮಗಳಿಂದ ಬುದ್ಧಿ ಚುರುಕಾಗುತ್ತದೆ. ಓದಿದ್ದು ಸುಲಭವಾಗಿ ಅರ್ಥವಾಗುತ್ತದೆ. ಮನಸ್ಸಿಗೆ ಖುಷಿಯಾಗುತ್ತದೆ. ದೇಹಕ್ಕೆ ಲವಲವಿಕೆ ಬರುತ್ತದೆ. ಆಮೇಲೆ ನಿಮ್ಮ ಆರೋಗ್ಯ ಫಸ್ಟ್-ಕ್ಲಾಸ್! ಜೊತೆಗೆ ನೀವು ಪರೀಕ್ಷೇಲೂ ಫಸ್ಟ್-ಕ್ಲಾಸ್!

ನಿಮಗೆ ಪೌಷ್ಟಿಕ ಆಹಾರ ಒದಗಿಸುವುದು ನಿಮ್ಮ ಪೋಷಕರ ಕೆಲಸ. ಆದರೆ ಈ ಕೆಳಗೆ ಹೇಳುವ ಸಂಗತಿಗಳನ್ನು ಮರೆಯದೇ ಅನುಸರಿಸುವುದು ನಿಮ್ಮ ಕೆಲಸ.

1. ಸದಾ ಒಂದೇ ಬಗೆಯ ಊಟಮಾಡಬೇಡಿ. `ಅನ್ನ, ತಿಳಿಸಾರು ಬಿಟ್ಟರೆ ಏನೂ ತಿನ್ನುವುದೇ ಇಲ್ಲ' ಎಂದು ಅಮ್ಮ ರೇಗುವಂತೆ ಮಾಡಬೇಡಿ. ಬಗೆಬಗೆಯ ಖಾದ್ಯಗಳನ್ನು ತಿನ್ನುವುದರಿಂದ ನಿಮಗೆ ವಿವಿಧ ರುಚಿಗಳು ಲಭಿಸುವ ಜೊತೆಗೆ ವಿವಿಧ ಪೌಷ್ಟಿಕಾಂಶಗಳು ದೊರಕುತ್ತವೆ.

2. ನಿಮ್ಮ ಆಹಾರದಲ್ಲಿ ಹಣ್ಣುಗಳು, ಸೊಪ್ಪುಗಳು, ಹಸಿರು ತರಕಾರಿಗಳು ಮತ್ತು ಕಾಳುಗಳು ಧಾರಾಳವಾಗಿರಬೇಕು. ಇವುಗಳಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅನೇಕ ರೋಗಗಳು ನಿಮ್ಮ ಹತ್ತಿರ ಬರುವುದೇ ಇಲ್ಲ.

3. ದಿನಕ್ಕೆ ಏನಿಲ್ಲವೆಂದರೂ 8-9 ದೊಡ್ಡ ಲೋಟ ನೀರು ಕುಡಿಯಬೇಕು. ಹಾಲೂ ಅಷ್ಟೇ. ದಿನಕ್ಕೆ ಕನಿಷ್ಠ ಒಂದು (ಅಥವಾ ಎರಡು) ದೊಡ್ಡ ಲೋಟದಷ್ಟು ಹಾಲು ಕುಡಿಯಬೇಕು. `ಹಾಲು ಕುಡಿ' ಎಂದು ಅಮ್ಮ ಕರೆದರೆ `ಈಗ ಬೇಡ' ಎನ್ನಕೂಡದು.

4. ಎಷ್ಟು ತಿನ್ನುತ್ತಿದ್ದೇವೆ ಎನ್ನುವ ಅರಿವೂ ಇರಬೇಕು. ಊಟಕ್ಕೆ ಕೂತಾಗ ತಿನಿಸುಗಳು ರುಚಿಯಾಗಿವೆ ಎಂದು ಹೊಟ್ಟೆಬಾಕರ ಹಾಗೆ ತಿನ್ನಬಾರದು.

5. ರಜೆ ಸಿಕಿದಾಗಲೆಲ್ಲಾ, ಬಿಡುವು ದೊರೆತಾಗಲೆಲ್ಲಾ, ಟಿವಿ, ಡಿವಿಡಿ, ವೀಡಿಯೋ ಗೇಮ್ಸ್ ಅಂತ ಹೆಚ್ಚು ಕೂರಬಾರದು. ಹೊರಗೆ ಮೈದಾನದಲ್ಲಿ, ಸ್ನೇಹಿತರೊಡನೆ ಚೆನ್ನಾಗಿ ಆಡಬೇಕು. ಚಿತ್ರ ಬರೆಯುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವೇಳಾಪಟ್ಟಿ ಹಾಕಿಕೊಂಡು ಟಿವಿ, ಕಂಪ್ಯೂಟರ್ಗಳಿಗೂ ಒಂದಿಷ್ಟು ಸಮಯ ನೀಡಬೇಕು.

6. ಒಂದು ವಿಷಯ ಮರೆಯಬಾರದು. ಸದಾ ಚಟುವಟಕೆಯಿಂದ ಇರಬೇಕು. ಸದಾ `ಅಯ್ಯೋ! ಬೋರು.. ಥೂ! ಬೇಜಾರು...' ಎನ್ನುತ್ತಿರಬಾರದು.

ಅನ್ಯ ಗ್ರಹಗಳಲ್ಲಿ ಜೀವಿಗಳಿವೆಯೆ?

ಈ ಬ್ರಹ್ಮಾಂಡದಲ್ಲಿ ನಾವು ಒಂಟಿಯೆ? ಭೂಮಿಯಂತೆ ಜೀವಿಗಳನ್ನು ಹೊಂದಿರುವ ಇನ್ನೊಂದು ಗ್ರಹ ಇದೆಯೆ? ಇದ್ದರೆ ಅದನ್ನು ಪತ್ತೆಹಚ್ಚಿ ಆ ಜೀವಿಗಳನ್ನು ಮಾತನಾಡಿಸಿ...ವ್ಹಾ!!


ಬೇರೆ ಗ್ರಹಗಳಿಂದ `ಮಾನವರು' ಭೂಮಿಗೆ ಎಂದಾದರೂ ಬಂದಿದ್ದಾರೆಯೆ? ಹಾಗೆಂದು ಹೇಳಲು ಆಧಾರಗಳಿಲ್ಲ ಎನ್ನುವುದು ಬಹುತೇಕ ವಿಜ್ಞಾನಿಗಳ `ಅಧಿಕೃತ' ನಿಲುವು. ಆದರೂ ಅನ್ಯಗ್ರಹ ಜೀವಿಗಳ ಬಗ್ಗೆ ಕುತೂಹಲ ಇದ್ದೇ ಇದೆ. ವಿಜ್ಞಾನಿಗಳು ತಮ್ಮ ಅನ್ವೇಷಣೆ ಮುಂದುವರಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ನಲ್ಲಿರುವ ಕಾನರ್ೆಗಿ ಇನ್ಸ್ಟಿಟ್ಯೂಟ್ 17,129 ಗ್ರಹಗಳ ಪಟ್ಟಿ ತಯಾರಿಸಿದೆ. ಈ ಗ್ರಹಗಳಲ್ಲಿ ಯಾವುದಾರೊಂದು ರೀತಿಯ ಜೀವಿಗಳು ಇರಬಹುದಾದ ವಾತಾವರಣ, ಪರಿಸರ ಇದೆ ಎಂದು ತಿಳಿಸಿದೆ. `ಹೌದೇ, ನೋಡಿಯೇ ಬಿಡೋಣ' ಎಂದು ಪತ್ತೆಹಚ್ಚಲು ಸರ್ರೆಂದು ಹೊರಡುವ ತಂತ್ರಜ್ಞಾನ ಸದ್ಯಕ್ಕೆ ನಮ್ಮ ಬಳಿ ಇಲ್ಲ. ದೂರದರ್ಶಕ ಹಾಕಿಕೊಂಡೋ ಇತರ ವಿಧಾನ ಅನುಸರಿಸಿಕೊಂಡೋ ಒಂದೊಂದು ಗ್ರಹವನ್ನೇ ಪರೀಕ್ಷಿಸಲು ಹೊರಟರೆ ದಶಕಗಳೇ ಹಿಡಿಯುತ್ತವೆ. ಆಗಲೂ ನಿಖರ ಫಲಿತಾಂಶ ಸಿಗುತ್ತದೆಯೇ ಎಂಬುದನ್ನು ಹೇಳಲಾಗದು.

ಯಾವುದಾರೊಂದು ಗ್ರಹದಲ್ಲಿ ಜೀವಿಗಳು ವಿಕಾಸವಾಗಲು ಆ ಗ್ರಹಕ್ಕೆ ಏನಿಲ್ಲವೆಂದರೂ 300 ಕೋಟಿ ವರ್ಷಗಳಷ್ಟಾದರೂ ವಯಸ್ಸಾಗಿರಬೇಕು. ಅದು ಭೂಮಿಯಂತಹ ಗ್ರಹವಾಗಿರಬೇಕು ಎನ್ನುತ್ತಾರೆ ವಿಜ್ಞಾನಿಗಳು.

ಯಾವುದಾದರೂ ಗ್ರಹಗಳಲ್ಲಿ ನಮಗಿಂತಲೂ ಬುದ್ಧಿವಂತ ಜೀವಿಗಳಿದ್ದರೆ ಅವರು ನಮ್ಮನ್ನು ಇನ್ನೂ ಏಕೆ ಸಂಪಕರ್ಿಸಿಲ್ಲ?

`ಅವರು ನಿಗೂಢ ವಾಹನಗಳಲ್ಲಿ (ಹಾರುವ ತಟ್ಟೆಗಳು) ನಮ್ಮ ಬಳಿ ಬರುತ್ತಿದ್ದಾರೆ. ನಾವದನ್ನು ಕಂಡಿದ್ದೇವೆ' ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಅವುಗಳಿಗೆ `ಗುರುತು ಪತ್ತೆಯಾಗದ ಹಾರುವ ವಸ್ತುಗಳು' - `ಯುಎಫ್ಒ' ಎನ್ನುತ್ತಾರೆ. ಆದರೆ `ಈ ಯುಎಫ್ಒ ಬಗ್ಗೆ ಜನರು ಮಾಡಿರುವ ವರದಿಗಳು ಖಚಿತವಲ್ಲ. ಬೆಳಕಿನ ಉಂಡೆಗಳಂತೆ ಕಾಣುವ ಯುಎಫ್ಒಗಳು ವಾಸ್ತವವಾಗಿ ಆಗಸದಲ್ಲಿ ಜರುಗುತ್ತಿರುವ ಕೆಲವು ಪರಿಸರ ವಿದ್ಯಮಾನಗಳು. ಅವನ್ನು ವಾಹನಗಳು ಎಂದು ಜನರು ಭ್ರಮಿಸಿದ್ದಾರೆ. ಕೆಲವರು ಪ್ರಚಾರದ ಆಸೆಯಿಂದಲೂ ಸುಳ್ಳು ಹೇಳುತ್ತಾರೆ' ಎನ್ನುವುದು ವಿಜ್ಞಾನಿಗಳ `ಅಧಿಕೃತ' ಅಭಿಪ್ರಾಯ. ಆದರೂ ಈ ಕುರಿತ ಅನುಮಾನಗಳು ಇನ್ನೂ ಬಗೆಹರಿದಿಲ್ಲ.

ಬ್ರಹ್ಮಾಂಡದಲ್ಲಿ ಜೀವಿಗಳಿರಬಹುದು ಎಂಬ ಆಶಾಭಾವನೆ ಮಾತ್ರ ವಿಜ್ಞಾನಿಗಳಿಗೂ ಹೋಗಿಲ್ಲ. 1960ರಲ್ಲಿ ಫ್ರಾಂಕ್ ಡೇಕ್ ಎನ್ನುವ ಖಗೋಳಜ್ಞ 85 ಅಡಿ ರೇಡಿಯೋ ಡಿಷ್ ಬಳಸಿ ಅಮೆರಿಕದ ವಜರ್ೀನಿಯಾದಲ್ಲಿರುವ ರಾಷ್ಟ್ರೀಯ ಖಗೋಳ ವೀಕ್ಷಣಾಲಯದಿಂದ ಅನ್ಯಗ್ರಹಗಳಿಂದ ಏನಾದರೂ ರೇಡಿಯೋ ಸಂದೇಶ ಬರುತ್ತಿದೆಯೇ ಎಂದು ಆಲಿಸಿದರು. ಫಲಿತಾಂಶ `ಟುಸ್' ಆಯಿತು.

ಆದರೂ `ನಮ್ಮನ್ನು ಯಾರೋ ಸಂಪಕರ್ಿಸುತ್ತಾರೆ' ಎಂಬ ನಂಬಿಕೆ ಪ್ರಬಲವಾಗಿ ಬೆಳೆಯಿತು. ಅವರು ನಮ್ಮನ್ನು ಸಂಪಕರ್ಿಸುತ್ತಿದ್ದರೂ ನಮಗದು ತಿಳಿಯುತ್ತಿಲ್ಲ ಎಂದು ವಾದಿಸುವವರೂ ಹುಟ್ಟಿಕೊಂಡರು. ಕ್ಯಾಲಿಫೋನರ್ಿಯಾದಲ್ಲಿ `ಸೇಟಿ' (ಎಸ್ಇಟಿಐ- ಬಾಹ್ಯಾಕಾಶ ಬುದ್ಧಿಜೀವಿಗಳಿಗಾಗಿ ಅನ್ವೇಷಣೆ) ಇನ್ಸ್ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆಯ ಸ್ಥಾಪನೆಯಾಯಿತು. ಅದೀಗ ಇಂಟರ್ನೆಟ್ ಮೂಲಕ ಸಾವಿರಾರು ಸದಸ್ಯರನ್ನು ಹೊಂದಿದ್ದು, ಅವರೆಲ್ಲ ಅನ್ಯಗ್ರಹಗಳ ರೇಡಿಯೋ ಸಂಕೇತಗಳನ್ನು ಆಲಿಸಲು ದಿನವೂ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಅಂತಹ ಯಾವುದೇ ಸಂಕೇತ ದೊರೆತ ವರದಿಗಳು ಬಂದಿಲ್ಲ.
ಅದು ಹೋಗಲಿ, ನಾವೇ ಅನ್ಯಗ್ರಹವಾಸಿಗಳನ್ನು ಸಂಪಕರ್ಿಸಿದರೆ!?

1972ರಲ್ಲಿ ಮಾನವ ಗಂಡು-ಹೆಣ್ಣುಗಳ ಚಿತ್ರವಿರುವ ಫಲಕವನ್ನು ಪಯೋನಿಯರ್-10 ಉಪಗ್ರಹಕ್ಕೆ ಅಳವಡಿಸಿ ಹಾರಿಬಿಡಲಾಗಿದೆ. ಯಾರಾದರೂ ನೋಡಿದರೆ ನಮ್ಮನ್ನು ಕಂಡುಹಿಡಿಯಲಿ ಎಂಬುದು ಅದರ ಆಶಯ. ಇಂತಹ ಅನೇಕ ಪ್ರಯತ್ನಗಳಾಗಿವೆ. 1977ರಲ್ಲಿ ಧ್ವನಿಮುದ್ರಣವನ್ನೂ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. 55 ಬಾಷೆಗಳ ಗ್ರೀಟಿಂಗ್, ಬಲ್ಗೇರಿಯಾದ ಜಾನಪದ ಗೀತೆಗಳನ್ನು ವಾಯೇಜರ್ ಉಪಗ್ರಹ ತೆಗೆದುಕೊಂಡು ಹೋಗಿದೆ.

2006ರಲ್ಲಿ `ಕಾಸ್ಮಿಕ್ ಕನೆಕ್ಷನ್' ಎನ್ನುವ ಟಿವಿ ಕಾರ್ಯಕ್ರಮವನ್ನು ಭೂಮಿಯಿಂದ 45 ಜ್ಯೋತಿರ್ವರ್ಷಗಳಷ್ಟು ದೂರವಿರುವ (ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಕ್ರಮಿಸುವುದು ಬೆಳಕಿನ ವೇಗ. ಈ ವೇಗದಲ್ಲಿ 45 ವರ್ಷ ಕ್ರಮಿಸಬೇಕಾದಷ್ಟು ದೂರ!) ಎರೈ ಎನ್ನುವ ನಕ್ಷತ್ರದ ಕಡೆದೆ ತೂರಿಬಿಡಲಾಗಿದೆ.  ವೀಡಿಯೊ ಅಲ್ಲಿಗೆ 2051ರಲ್ಲಿ ತಲುಪುತ್ತದೆ. ಅಲ್ಲಿಂದ ಯಾರಾದರೂ ತಕ್ಷಣ ಬೆಳಕಿನವೇಗದಲ್ಲೇ ಉತ್ತರ ಕಳುಹಿಸಿದರೂ ಅದು ಭೂಮಿಯನ್ನು ಮುಟ್ಟಲು ಇನ್ನೂ 45 ವರ್ಷಗಳು ಬೇಕು.

ಅಲ್ಲಿಯವರೆಗೂ ಕಾದು ನೋಡೋಣ!